ತಮಿಳುನಾಡು | ಶಾಲಾ ಶಿಕ್ಷಣ ಗುಣಮಟ್ಟ ಕುಸಿತ: ರಾಜ್ಯಪಾಲ ಆರ್.ಎನ್.ರವಿ ಟೀಕೆ
x
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ

ತಮಿಳುನಾಡು | ಶಾಲಾ ಶಿಕ್ಷಣ ಗುಣಮಟ್ಟ ಕುಸಿತ: ರಾಜ್ಯಪಾಲ ಆರ್.ಎನ್.ರವಿ ಟೀಕೆ

ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ರಾಷ್ಟ್ರೀಯ ಸರಾಸರಿಗಿಂತ ಕೆಳಮಟ್ಟಕ್ಕೆ ಕುಸಿದಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.


Click the Play button to hear this message in audio format

ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ರಾಷ್ಟ್ರೀಯ ಸರಾಸರಿಗಿಂತ ತಳಮಟ್ಟಕ್ಕೆ ಕುಸಿದಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

ಈ ಹೇಳಿಕೆಗೆ ರಾಜ್ಯ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯಿಸಿದ್ದು, ತಮಿಳುನಾಡಿನ ಶಿಕ್ಷಣ ವ್ಯವಸ್ಥೆಯು ಚಂದ್ರಯಾನ -3 ರ ನಿರ್ದೇಶಕ ಪಿ ವೀರಮುತ್ತುವೆಲ್ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ನಿರ್ದೇಶಕ ಮೈಲೈಸ್ವಾಮಿ ಅಣ್ಣಾದೊರೈ ಅವರಂತಹ ಪ್ರತಿಭಾವಂತ ವಿಜ್ಞಾನಿಗಳನ್ನು ನಿರ್ಮಿಸಿದೆ ಎಂದು ತಿರುಗೇಟು ನೀಡಿದ್ದಾರೆ.

ಶೂನ್ಯ ನಿರ್ಬಂಧಗಳು

ಇಲ್ಲಿನ ರಾಜಭವನದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು, ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ರಾಷ್ಟ್ರೀಯ ಸರಾಸರಿಗಿಂತ ತಳಮಟ್ಟಕ್ಕೆ ಕುಸಿದಿದ್ದು, ಶಾಲಾ ವಿದ್ಯಾರ್ಥಿಗಳು ಯಾವುದೇ ನಿರ್ಭಂದವಿಲ್ಲದೆ ಪದವಿ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ. ಇದು ತುಂಬಾ ಅಪಾಯಕಾರಿ ಪರಿಸ್ಥಿತಿ. ಸರ್ಕಾರಿ ಶಾಲೆಗಳಲ್ಲಿ ನಮ್ಮ ಶಿಕ್ಷಣದಲ್ಲಿನ ಈ ತೀವ್ರ ಕುಸಿತವು ನಮ್ಮ ದೇಶದಲ್ಲಿ ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.

ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು "ಉದ್ಯೋಗವಿಲ್ಲದ ಮತ್ತು ಉಪಯುಕ್ತ ಪ್ರಮಾಣಪತ್ರ ಅಥವಾ ಪದವಿ ಹೊಂದಿರುವವರಲ್ಲ" ಎಂದು ನಿರೂಪಿಸುತ್ತಿದೆ .ಇದು ತುಂಬಾ ಗಂಭೀರ ಸಮಸ್ಯೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ಭಾರತದಲ್ಲೇ ಅತ್ಯುತ್ತಮ: ಉದಯನಿಧಿ

ಶಿಕ್ಷಕರ ದಿನದ ಸ್ಮರಣಾರ್ಥ ಇಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ, ರಾಜ್ಯಪಾಲರ ಹೆಸರನ್ನು ಉಲ್ಲೇಖಿಸದೆ ಉದಯನಿಧಿ ಅವರು, "ನಮ್ಮ ಶಾಲಾ ಶಿಕ್ಷಣ ಪಠ್ಯಕ್ರಮವನ್ನು ವ್ಯಕ್ತಿಯೊಬ್ಬರು ಟೀಕಿಸಿದ್ದಾರೆ. ವಿದ್ಯಾರ್ಥಿಗಳು ಸ್ವಂತವಾಗಿ ಯೋಚಿಸಲು ಪ್ರೋತ್ಸಾಹಿಸುವ ನಮ್ಮ ಶಿಕ್ಷಣ ವ್ಯವಸ್ಥೆ ಭಾರತದಲ್ಲಿಯೇ ಅತ್ಯುತ್ತಮವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ವೈದ್ಯರು, ಎಂಜಿನಿಯರ್‌ಗಳು ಮತ್ತು ಇತರ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತಮಿಳುನಾಡು ಇಸ್ರೋಗೆ ವೀರಮುತ್ತುವೇಲ್ ಮತ್ತು ಮಲೈಸ್ವಾಮಿಯಂತಹ ವಿಜ್ಞಾನಿಗಳನ್ನು ಕೊಡುಗೆ ನೀಡಿದೆ. ನಮ್ಮ ಶಿಕ್ಷಣ ವ್ಯವಸ್ಥೆಯ ವಿರುದ್ಧ ನಾವು ಯಾವುದೇ ಟೀಕೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅಂತಹ ಟೀಕೆಗಳು ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅವಮಾನಿಸಿದಂತೆ ಎಂದು ಉದಯನಿಧಿ ಹೇಳಿದರು.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ವಿದ್ಯಾರ್ಥಿಗಳ ಭವಿಷ್ಯದ ಒಳಿತಿನ ಬಗ್ಗೆ ಹೆಚ್ಚು ಚಿಂತನೆ ನಡೆಸಿದ್ದಾರೆ ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ಉಪಕ್ರಮಗಳನ್ನು ಪ್ರಾರಂಭಿಸಿದ್ದಾರೆ ಎಂದ ಅವರು, ನಮ್ಮ ಶಿಕ್ಷಣದ ಪಠ್ಯಕ್ರಮದ ಬಗ್ಗೆ ಯಾರೋ ಸುಳ್ಳು ನಿರೂಪಣೆ ಮಾಡುತ್ತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅರಗಿಸಿಕೊಳ್ಳಲಾಗದವರು ಹೀಗೆ ಟೀಕಿಸುತ್ತಿದ್ದಾರೆ ಎಂದು ರಾಜ್ಯಪಾಲರ ಹೆಸರು ಪ್ರಸ್ತಾಪಿಸದೆಯೇ ತಿರುಗೇಟು ನೀಡಿದರು.

Read More
Next Story