J and K Polls | ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತ್ಯಗೊಂಡಿದೆ: ಮೋದಿ
x

J and K Polls | ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತ್ಯಗೊಂಡಿದೆ: ಮೋದಿ


ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯುಸಿರು ಎಳೆಯುತ್ತಿದೆ. ತಮ್ಮ ಸರ್ಕಾರವು ಈ ಸುಂದರ ಪ್ರದೇಶವನ್ನು ನಾಶಪಡಿಸಿದ ವಂಶಪಾರಂಪರ್ಯ ರಾಜಕೀಯವನ್ನು ಎದುರಿಸಲು ಹೊಸ ನಾಯಕತ್ವವನ್ನು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಜಮ್ಮು ಪ್ರದೇಶದ ದೋಡಾ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮಾತನಾಡಿ, ʻನಾವು ಮತ್ತು ನೀವು ಒಟ್ಟಾಗಿ ಜಮ್ಮು- ಕಾಶ್ಮೀರವನ್ನು ದೇಶದ ಸುರಕ್ಷಿತ ಮತ್ತು ಸಮೃದ್ಧ ಭಾಗವಾಗಿ ಮಾಡೋಣ,ʼ ಎಂದು ಹೇಳಿದರು.

ಸೆಪ್ಟೆಂಬರ್ 18 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಮೊದಲ ಹಂತಕ್ಕೆ ಮುನ್ನ ಪ್ರಧಾನಿ ನಡೆಸಿದ ಮೊದಲ ಚುನಾವಣೆ ಸಭೆ ಇದಾಗಿದೆ.

ʻಸ್ವಾತಂತ್ರ್ಯಾನಂತರ ಜಮ್ಮು- ಕಾಶ್ಮೀರ ವಿದೇಶಿ ಶಕ್ತಿಗಳಿಗೆ ಗುರಿಯಾಯಿತು; ವಂಶಪಾರಂಪರ್ಯ ರಾಜಕೀಯವು ಈ ಸುಂದರ ಪ್ರದೇಶವನ್ನು ಒಳಗಿನಿಂದ ಟೊಳ್ಳಾಗಿಸಿತು. ರಾಜಕೀಯ ಶಕ್ತಿಗಳು ತಮ್ಮ ಮಕ್ಕಳನ್ನು ಬೆಳೆಸಿದರೇ ಹೊರತು ಹೊಸ ನಾಯಕತ್ವ ಬೆಳೆಯಲು ಬಿಡಲಿಲ್ಲ,ʼ ಎಂದು ಹೇಳಿದರು.

ʻ2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರವು ಯುವ ನಾಯಕತ್ವವನ್ನು ರೂಪಿಸುವತ್ತ ಗಮನಹರಿಸಿದೆ,ʼ ಎಂದು ಹೇಳಿದರು.

Read More
Next Story