
ಶೇಖ್ ಹಸೀನಾ ಮುಂದಿನ ಚುನಾವಣೆಯಲ್ಲಿ ಬಾಂಗ್ಲಾದೇಶದ ಪ್ರಧಾನಿಯಾಗಿ ಮರಳಿ ಅಧಿಕಾರಕ್ಕೆ ಬರಬಹುದೇ?
ನಿಷೇಧದ ಹೊರತಾಗಿಯೂ, ಅವಾಮಿ ಲೀಗ್, ಮಧ್ಯಂತರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ಮುಂದುವರಿಸಿದೆ. ಪಕ್ಷವು ತಾತ್ಕಾಲಿಕವಾಗಿ ಕುಸಿದಿದ್ದರೂ ಸಂಪೂರ್ಣವಾಗಿ ತೊಲಗಿಲ್ಲ ಎಂಬುದನ್ನು ಸೂಚಿಸುತ್ತದೆ.
ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಚುನಾವಣೆಗಳು ನಡೆಯುವ ನಿರೀಕ್ಷೆಯಿದ್ದು, ದೇಶದ ರಾಜಕೀಯ ವಲಯದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಭವಿಷ್ಯದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ, ಅವಾಮಿ ಲೀಗ್ ತೀವ್ರ ಸಂಕಷ್ಟದಲ್ಲಿದ್ದು, ಶೇಖ್ ಹಸೀನಾ ಗಡಿಪಾರಾಗಿದ್ದಾರೆ. ಪಕ್ಷದ ಹಲವು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರನ್ನು ಪ್ರಸ್ತುತ ಆಡಳಿತವು ಬಂಧಿಸಿದೆ. ಈ ಎಲ್ಲಾ ಸವಾಲುಗಳ ನಡುವೆಯೂ, ಬಾಂಗ್ಲಾದೇಶದ ರಾಜಕೀಯ ಸಮೀಕರಣಗಳು ಕುತೂಹಲಕಾರಿಯಾಗಿ ಬದಲಾಗುತ್ತಿವೆ.
ಅವಾಮಿ ಲೀಗ್ನ ಸವಾಲುಗಳು ಮತ್ತು ಪ್ರತಿಭಟನೆಗಳು
ನಿಷೇಧದ ಹೊರತಾಗಿಯೂ, ಅವಾಮಿ ಲೀಗ್, ಮಧ್ಯಂತರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ಮುಂದುವರಿಸಿದೆ. ಪಕ್ಷವು ತಾತ್ಕಾಲಿಕವಾಗಿ ಕುಸಿದಿದ್ದರೂ ಸಂಪೂರ್ಣವಾಗಿ ತೊಲಗಿಲ್ಲ ಎಂಬುದನ್ನು ಸೂಚಿಸುತ್ತದೆ. ಹಸೀನಾ ಅವರು ಕಳೆದುಕೊಂಡ ಜನಪ್ರಿಯತೆಯನ್ನು ಮರಳಿ ಪಡೆಯಬಹುದೇ ಮತ್ತು ಇಸ್ಲಾಮೀಕರಣಗೊಳ್ಳುತ್ತಿರುವ ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ಗೆ ಭವಿಷ್ಯವಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಪ್ರಸ್ತುತ, ಮಾಧ್ಯಮಗಳಲ್ಲಿ ಹೆಚ್ಚಿನ ವರದಿಗಳು ಅವಾಮಿ ಲೀಗ್ ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ಎತ್ತಿ ತೋರಿಸುತ್ತವೆ. ಆದರೆ, ಮುಂಬರುವ ಚುನಾವಣೆಗಳು ಮುಖ್ಯವಾಗಿ ನ್ಯಾಷನಲ್ ಸಿವಿಲ್ ಪಾರ್ಟಿ ಮತ್ತು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(BNP) ನಡುವಿನ ಸ್ಪರ್ಧೆಯಾಗಿ ರೂಪುಗೊಳ್ಳುತ್ತಿವೆ ಎಂಬ ಸೂಚನೆಯೂ ಇದೆ.
ಬಿಎನ್ಪಿಗೆ ಲಾಭ ಮತ್ತು ಯೂನುಸ್ ಪಾತ್ರ
ಪ್ರಸ್ತುತ ರಾಜಕೀಯ ವಾತಾವರಣದಲ್ಲಿ, ತಂಡ ಯೂನುಸ್ (ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಮತ್ತು ಅವರ ಸಹಾಯಕರು) ಅಥವಾ ಅವರ ಪ್ರಾಥಮಿಕ ಬೆಂಬಲಿಗ ಎನ್ಸಿಪಿಗೆ ಲಾಭವಾಗದೇ, 2026ರ ಸಾಮಾನ್ಯ ಚುನಾವಣೆಯಲ್ಲಿ ಬಿಎನ್ಪಿಗೆ ಸಾರ್ವಜನಿಕ ಚಿತ್ರಣ ಮತ್ತು ಅಲ್ಪಕಾಲಿಕ ಸಾಧ್ಯತೆಗಳಲ್ಲಿ ಸ್ಪಷ್ಟವಾದ ಲಾಭವಿದೆ. ಬಿಎನ್ಪಿಯ ಭ್ರಷ್ಟಾಚಾರದ ದಾಖಲೆಯನ್ನು ಅದರ ಸಾಂಪ್ರದಾಯಿಕ ಮತದಾರರು ಕ್ಷಮಿಸಿದ್ದಾರೆ ಎಂದು ತೋರುತ್ತಿದೆ.
ಆಗಸ್ಟ್ 5, 2024 ರಂದು ಅವಾಮಿ ಲೀಗ್ ಅಧಿಕಾರದಿಂದ ಕೆಳಗಿಳಿದ "ಎರಡನೇ ವಿಮೋಚನೆ" ಎಂದು ಕರೆಯಲ್ಪಟ್ಟ ದಿನದಿಂದ ಕೇವಲ 10 ತಿಂಗಳ ನಂತರ ಇಂತಹ ವರದಿಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದನ್ನು ಮುಹಮ್ಮದ್ ಯೂನುಸ್ ಗಮನಿನಿಸರಬಹುದು. ಮಧ್ಯಂತರ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿಲ್ಲ. 20 ಬಿಲಿಯನ್ಗಿಂತಲೂ ಡಾಲರ್ಗಿಂತಲೂ ಹೆಚ್ಚಿನ ವಿದೇಶಿ ವಿನಿಮಯ ಮೀಸಲು ಉಳಿಸಿಕೊಂಡು, ಆರ್ಥಿಕವಾಗಿ ದೇಶಕ್ಕೆ ಸ್ವಲ್ಪ ಉಸಿರಾಟದ ಅವಕಾಶವನ್ನು ಕಲ್ಪಿಸಿದೆ. ಯೂನುಸ್ ಅವರ ಅಂತರರಾಷ್ಟ್ರೀಯ ಆರ್ಥಿಕ ತಜ್ಞರ ಖ್ಯಾತಿಯೂ ಇದಕ್ಕೆ ಪೂರಕವಾಗಿದೆ. ಇದರ ಜೊತೆಗೆ, ಸ್ಥಿರ ವಲಸೆ ಕಾರ್ಮಿಕರ ಹಣದ ಹರಿವು ಉಳಿದಿದೆ, ಇದು ಸಣ್ಣ ಸಾಧನೆಯೇನಲ್ಲ.
ಮಧ್ಯಂತರ ಸರ್ಕಾರವು ಬಾಂಗ್ಲಾದೇಶದ ಜೈಲುಗಳಿಂದ ಶಿಕ್ಷೆಗೊಳಗಾದ ಕೈದಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತಹ ಜನಪ್ರಿಯ ಕ್ರಮಗಳನ್ನೂ ಕೈಗೊಂಡಿದೆ. ಆರಂಭಿಕ ರಾಜಕೀಯ ಅಶಾಂತಿ ಮತ್ತು ಹಿಂಸಾಚಾರದ ಹೊರತಾಗಿಯೂ, ಕೈಗಾರಿಕೋದ್ಯಮಿಗಳು ಕ್ರಮೇಣ ಗಾರ್ಮೆಂಟ್ ಮತ್ತು ಇತರ ಪ್ರಮುಖ ಕ್ಷೇತ್ರಗಳಲ್ಲಿ ಮುಚ್ಚಲಾಗಿದ್ದ ಘಟಕಗಳನ್ನು ಪುನರಾರಂಭಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯೂ ಸುಧಾರಿಸಿದ್ದು, ಸರ್ಕಾರ ಮುಂಬರುವ ಚುನಾವಣೆಗಳ ಬಗ್ಗೆ ರಾಜಕೀಯ ನಾಯಕರೊಂದಿಗೆ ಸಂವಾದ ಆರಂಭಿಸಿದೆ.
ಯೂನುಸ್ರವರ ತಾತ್ಕಾಲಿಕ ಯೋಜನೆ ಮತ್ತು ಅನುಮಾನಗಳು
ಮಧ್ಯಂತರ ಸರ್ಕಾರವು 2026ರ ಫೆಬ್ರವರಿ ಅಥವಾ ಏಪ್ರಿಲ್ನಲ್ಲಿ ಚುನಾವಣೆಗಳನ್ನು ನಡೆಸುವ ತಾತ್ಕಾಲಿಕ ಯೋಜನೆಯು ಬಿಎನ್ಪಿ ಮಾತ್ರವಲ್ಲದೆ ಇತರ ರಾಜಕೀಯ ಪಕ್ಷಗಳಿಗೂ ಸ್ವಲ್ಪ ನಿರಾಳತೆ ತಂದಿದೆ. ಬಿಎನ್ಪಿಯ ಹಲವರಿಗೆ, ಇದು ಯೂನುಸ್ ಅಧಿಕಾರದ ಆಸೆಯನ್ನು ಹೊಂದಿದ್ದರೂ, ಪ್ರಮುಖ ರಾಜಕೀಯ ಸ್ಪರ್ಧಿಯಾಗಿ ಸ್ಥಾನ ಪಡೆಯದಿರಲು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಭರವಸೆಯ ಸಂಕೇತವಾಗಿದೆ.
ಯೂನುಸ್ ಕುರಿತು ಕೆಲವು ವಿಮರ್ಶಕರು ಇನ್ನೂ ಸಂಶಯ ವ್ಯಕ್ತಪಡಿಸಿದ್ದಾರೆ. ಮುಖ್ಯ ಸಲಹೆಗಾರರಾಗಿರುವ ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಚುನಾವಣೆಗಳನ್ನು ಮುಂದೂಡುವ ಅಧಿಕಾರವನ್ನು ಇನ್ನೂ ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಅಲ್ಲದೆ, ಚುನಾವಣೆಯ ಸಮಯದ ಬಗ್ಗೆ ಅವರು ಪ್ರಶ್ನೆಗಳಿಂದ ನುಣುಚಿಕೊಂಡಿದ್ದಾರೆ. ಆರಂಭದಿಂದಲೂ, ಬಾಂಗ್ಲಾದೇಶದಲ್ಲಿ ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸೂಕ್ತ ವಾತಾವರಣ ಸೃಷ್ಟಿಸಲು ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯ ಬೇಕಾಗಬಹುದು ಎಂದು ಯೂನುಸ್ ಸೂಚಿಸಿದ್ದರು. ಈ ಅವಧಿಯಲ್ಲಿ, ಚುನಾವಣಾ ವ್ಯವಸ್ಥೆ ಮತ್ತು ಯೋಜಿತ ಸಮಯದ ಬಗ್ಗೆ ಅವರು ತಮಗೆ ಎದುರಾಗಿರುವ ನಿರಂತರವಾಗಿ ಪ್ರಶ್ನೆಗಳಿಗೆ ಉತ್ತರಿಸಿಲ್ಲ.
ಯೂನುಸ್ ಬಾಂಗ್ಲಾದೇಶದ ಅಧ್ಯಕ್ಷ ಸ್ಥಾನವನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಕೆಲವು ರಾಜಕಾರಣಿಗಳು ಹೇಳುತ್ತಾರೆ. ಈ ಇತ್ತೀಚಿನ ಬೆಳವಣಿಗೆಗಳು ಯೂನುಸ್ ಮತ್ತು ರಾಜಕೀಯ ಪಕ್ಷಗಳಿಗೆ ವಿಶೇಷವಾಗಿ ಬಿಎನ್ಪಿಗೆ, ಒಳ್ಳೆಯ ಸೂಚನೆಯಾಗಿದೆ. ಆದರೆ, ಅವಾಮಿ ಲೀಗ್ನ ಮರಳಿ ಎದ್ದು ನಿಲ್ಲುವ ಭೀತಿಯು ಯೂನುಸ್ರವರಿಗೆ ಮತ್ತು ಎನ್ಸಿಪಿಗೆ ಕಡಿಮೆ ಬಿಎನ್ಪಿಗೂಒಂದು ಸವಾಲಾಗಿದೆ.
ಪ್ರಸ್ತುತ, ಅವಾಮಿ ಲೀಗ್ ತೀವ್ರ ಸಂಕಷ್ಟದಲ್ಲಿದೆ. ಶೇಖ್ ಹಸೀನಾ ಗಡಿಪಾರಿನಲ್ಲಿದ್ದು, ಪಕ್ಷದ ಎರಡನೇ ಮತ್ತು ಮೂರನೇ ಶ್ರೇಣಿಯ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರಲ್ಲಿ ಹಲವರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದು ಅವರ ಬಿಡುಗಡೆಯ ಸಾಧ್ಯತೆ ಕಡಿಮೆಯಿದೆ. ಈ ಪರಿಸ್ಥಿತಿಯಲ್ಲಿ, ರಾಜಕೀಯ ಲಾಭವು ತಾತ್ಕಾಲಿಕವಾಗಿ ಬಿಎನ್ಪಿಗೆ ಇದೆ.
ಅವಾಮಿ ಲೀಗ್ ನಡೆಸಿದ "ನಿರ್ಮಾಣಗೊಂಡ ಚುನಾವಣೆಗಳ" ವಿರುದ್ಧ ಪ್ರತಿಭಟನೆಯಾಗಿ ದೀರ್ಘಕಾಲ ಅಧಿಕಾರದಿಂದ ದೂರವಿರುವ ಮೂಲಕ ಬಿಎನ್ಪಿಯು ಅಸಾಮಾನ್ಯ ತಾಳ್ಮೆ ಮತ್ತು ಶಿಸ್ತಿನ ಪ್ರಜಾಪ್ರಭುತ್ವದ ವರ್ತನೆಯನ್ನು ತೋರಿಸಿದೆ. ಅದರ ನಾಯಕಿ ಖಾಲೇದಾ ಜಿಯಾ, ಆರೋಗ್ಯ ಸಮಸ್ಯೆಯ ಹೊರತಾಗಿಯೂ, ದೀರ್ಘಕಾಲದ ಗೃಹಬಂಧನವನ್ನು ಸಹಿಸಿದ್ದಾರೆ. ಅವರ ಮಗ ತಾರಿಖ್ ರಹಮಾನ್, ತಾಯಿಯಂತೆ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದರೂ, ಅಮೆರಿಕಕ್ಕೆ ದೀರ್ಘ ಗಡಿಪಾರಿನ ಸಮಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಅವಾಮಿ ಲೀಗ್ನ ಮೇಲಿನ ನಿಷೇಧವನ್ನು ಬೆಂಬಲಿಸುವ ಬಿಎನ್ಪಿ ಆರಂಭದಲ್ಲಿ ಈ ವಿಷಯದಲ್ಲಿ ವಿಭಿನ್ನ ಅಭಿಪ್ರಾಯ ಹೊಂದಿತ್ತು. ಹಿರಿಯ ನಾಯಕರಾದ ಮಿರ್ಜಾ ಫಖ್ರುಲ್ ಆಲಂಗಿರ್ ಮತ್ತು ರುಮಿನ್ ಫರ್ಹಾನಾ ಈ ನಿಷೇಧವನ್ನು ಬಹಿರಂಗವಾಗಿ ವಿರೋಧಿಸಿದ್ದರು. ಯೂನುಸ್ ತಂಡ ಅಂತಿಮವಾಗಿ ಬಿಎನ್ಪಿಯನ್ನು ಅವಾಮಿ ಲೀಗ್ನ ವಿರುದ್ಧದ ಕ್ರಮವನ್ನು ಬೆಂಬಲಿಸಲು ಹೇಗೆ ಒಪ್ಪಿಸಿತು ಎಂಬುದು ವಿಶ್ಲೇಷಕರಿಗೆ ಗೊತ್ತಾಗದ ಪ್ರಶ್ನೆ.
ಅವಾಮಿ ಲೀಗ್ನ ಅಚಲ ಶಕ್ತಿ ಮತ್ತು ಭಾರತದೊಂದಿಗಿನ ಸಂಬಂಧ
ನಿಷೇಧಿತ ಸ್ಥಿತಿಯಲ್ಲಿಯೂ ಅವಾಮಿ ಲೀಗ್ನ್ನು ಸುಲಭವಾಗಿ ಕಡೆಗಣಿಸಲಾಗುವುದಿಲ್ಲ. ಮೊದಲಿಗೆ, ಅವಾಮಿ ಲೀಗ್ನ್ನು ವಿಶ್ವವು ಬಾಂಗ್ಲಾದೇಶದ ಉದಯದೊಂದಿಗೆ ಸಂಬಂಧ ಕಲ್ಪಿಸಲಾಗಿದೆ. ಈ ಪಕ್ಷವು 1970-71 ರಲ್ಲಿ ಪಾಕಿಸ್ತಾನದ ವಿರುದ್ಧದ ದೀರ್ಘ ಮತ್ತು ರಕ್ತಸಿಕ್ತ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಿತ್ತು.
ಅವಾಮಿ ಲೀಗ್ ಬಾಂಗ್ಲಾದೇಶದ ಏಕೈಕ ರಾಜಕೀಯ ಪಕ್ಷವಾಗಿದ್ದು, ಇದು ಭಾರತದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಸ್ಥಿರವಾಗಿ ಗೌರವ ಮತ್ತು ವಿಶ್ವಾಸವನ್ನು ಗಳಿಸಿದೆ. ಈ ಸಂಬಂಧವು ಬಾಂಗ್ಲಾದೇಶದ ಸಂದರ್ಭದಲ್ಲಿ ವಿಶೇಷವಾಗಿ ಮಹತ್ವದ್ದು. ಏಕೆಂದರೆ ಭಾರತದ ಆಡಳಿತ ಪಕ್ಷಗಳೊಂದಿಗಿನ ಸಂಬಂಧವು ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳನ್ನು ಹೊಂದಿರುತ್ತದೆ.
ಬಿಎನ್ಪಿಯು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬಹುದೇ ಎಂಬುದು ಕಾದು ನೋಡಬೇಕಾದ ವಿಷಯ. ಬಾಂಗ್ಲಾದೇಶದ ಕೆಲವು ವರ್ಗಗಳಲ್ಲಿ ತೀವ್ರವಾದ ಇಸ್ಲಾಮಿಕ್ ಧೋರಣೆಯ ಕಡೆಗೆ ಒಲವು ಕಾಣಿಸುತ್ತಿದ್ದು, ಹಿಂದೂಗಳ ಮೇಲಿನ ದಾಳಿಗಳು ಮತ್ತು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸ್ಥಳಗಳ ಧ್ವಂಸದಂತಹ ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಇಂತಹ ವಾತಾವರಣದಲ್ಲಿ, ಎರಡೂ ದೇಶಗಳ ನಡುವಿನ ಹಿಂದಿನ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಬಹುದು. ದುರದೃಷ್ಟವಶಾತ್, ಯೂನುಸ್ ಭಾರತದ ಪ್ರಸ್ತುತ ನಾಯಕರನ್ನು ಪದೇ ಪದೇ ಪ್ರಶ್ನಿಸಿದ್ದಾರೆ. ಆದರೆ ಎನ್ಸಿಪಿಯ ಕೆಲವು ಯುವ ನಾಯಕರು ಪಾಕಿಸ್ತಾನ, ತಾಲಿಬಾನ್ನೊಂದಿಗೆ ಹತ್ತಿರದ ಸಂಬಂಧವನ್ನು ಬಯಸಿದ್ದಾರೆ.
ಬಾಂಗ್ಲಾದೇಶದ ಜಾತ್ಯತೀತ ಮತ್ತು ಉದಾರವಾದಿ ಶಕ್ತಿಗಳು ಸಾಂಸ್ಕೃತಿಕ ಪ್ರಭಾವದ ದೃಷ್ಟಿಯಿಂದ ಇನ್ನೂ ಪ್ರಭಾವಿಯಾಗಿವೆ, ಅವಾಮಿ ಲೀಗ್ನೊಂದಿಗೆ ದೃಢ ಬೆಂಬಲಿಗರು ಅವರು. ಈ ಸ್ಥಿರ ಬೆಂಬಲವು ಯೂನುಸ್ ಟೀಮ್, ಎನ್ಸಿಪಿ ಮತ್ತು ಕಡಿಮೆ ಪ್ರಮಾಣದಲ್ಲಿ ಬಿಎನ್ಪಿಗೆ, 2026 ರ ಚುನಾವಣೆಗೆ ಮೊದಲು ಆತಂಕ ಹುಟ್ಟುಹಾಕಿದೆ.
ದ ಫೆಡರಲ್ ಎಲ್ಲಾ ದೃಷ್ಟಿಕೋನಗಳಿಂದಲೂ ಅಭಿಪ್ರಾಯಗಳನ್ನು ಮಂಡಿಸಲು ಪ್ರಯತ್ನಿಸುತ್ತದೆ. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು, ಅಥವಾ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ.