LIVE Todays live news Mar 17th: ಅಬುಧಾಬಿಯಲ್ಲಿ ಕ್ಷಿಪಣಿ ದಾಳಿ: ಪಾಕಿಸ್ತಾನಿ ಪ್ರಜೆ ಸಾವು?
x

Today's live news Mar 17th: ಅಬುಧಾಬಿಯಲ್ಲಿ ಕ್ಷಿಪಣಿ ದಾಳಿ: ಪಾಕಿಸ್ತಾನಿ ಪ್ರಜೆ ಸಾವು?

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಮಂಗಳವಾರ ಮಾರ್ಚ್ 17, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 17 March 2026 8:01 AM IST

    ಬೈರುತ್ ಮೇಲೆ ಇಸ್ರೇಲ್ ಭೀಕರ ದಾಳಿ: ಲಕ್ಷಾಂತರ ಜನರ ಸ್ಥಳಾಂತರ

    ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಸಂಘಟನೆಯ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೋಮವಾರ ಮುಂಜಾನೆ ಲೆಬನಾನ್ ರಾಜಧಾನಿ ಬೈರುತ್ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿದೆ. ನಗರದಾದ್ಯಂತ ಸರಣಿ ಸ್ಫೋಟದ ಸದ್ದು ಕೇಳಿಬಂದಿದ್ದು, ಇಡೀ ಪ್ರದೇಶ ಹೊಗೆಯಿಂದ ಆವೃತವಾಗಿದೆ.

  • 17 March 2026 7:58 AM IST

    ಇರಾನ್ ಸಂಘರ್ಷಕ್ಕೆ ರಾಜಕೀಯ ಪರಿಹಾರವೊಂದೇ ದಾರಿ: ಜರ್ಮನಿ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್

    ಜರ್ಮನಿ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಇರಾನ್ ಒಳಗೊಂಡಿರುವ ಪ್ರಸ್ತುತ ಸಂಘರ್ಷಕ್ಕೆ ಮಿಲಿಟರಿ ಬಲಕ್ಕಿಂತ ರಾಜಕೀಯ ಪರಿಹಾರವೇ ಮುಖ್ಯ ಎಂದು ಒತ್ತಿಹೇಳಿದ್ದು, ಬಾಂಬ್ ದಾಳಿಗಳ ಮೂಲಕ ಇರಾನ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ಸಾಧ್ಯವಿಲ್ಲ ಹಾಗೂ ಇಲ್ಲಿ ಮಿಲಿಟರಿ ಪರಿಹಾರಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ಕಳುಹಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವನೆಯನ್ನು ತಿರಸ್ಕರಿಸಿದ ಅವರು, ನ್ಯಾಟೋ ಕೇವಲ ಒಂದು ರಕ್ಷಣಾತ್ಮಕ ಒಕ್ಕೂಟವೇ ಹೊರತು ಹಸ್ತಕ್ಷೇಪ ಮಾಡುವ ಸಂಘಟನೆಯಲ್ಲ ಎಂದು ನೆನಪಿಸಿದರು; ಇದೇ ವೇಳೆ ಲೆಬನಾನ್ ಮೇಲೆ ಭೂಸೇನಾ ದಾಳಿ ನಡೆಸದಂತೆ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಅವರು, ಇದು ನಿರಾಶ್ರಿತರ ಬಿಕ್ಕಟ್ಟನ್ನು ಉಲ್ಬಣಗೊಳಿಸುವ ದೊಡ್ಡ ತಪ್ಪಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಹೆಜ್ಬೊಲ್ಲಾ ಸಂಘಟನೆಯು ಕೂಡಲೇ ಶಸ್ತ್ರಾಸ್ತ್ರ ತ್ಯಜಿಸಿ ಇಸ್ರೇಲ್ ಮೇಲಿನ ದಾಳಿ ನಿಲ್ಲಿಸಬೇಕೆಂದು ಕರೆ ನೀಡಿದರು.

Read More
Next Story