ಉಡುಪಿ ಕೃಷ್ಣನ ಆಶೀರ್ವಾದ ಪಡೆದ ಜೂ. ಎನ್‌ಟಿಆರ್; ರಿಷಭ್ ಶೆಟ್ಟಿ ಸಾಥ್
x
ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಶನಿವಾರ ಕುಟುಂಬ ಸಮೇತ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.

ಉಡುಪಿ ಕೃಷ್ಣನ ಆಶೀರ್ವಾದ ಪಡೆದ ಜೂ. ಎನ್‌ಟಿಆರ್; ರಿಷಭ್ ಶೆಟ್ಟಿ ಸಾಥ್

ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಶನಿವಾರ ಕುಟುಂಬ ಸಮೇತ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.


Click the Play button to hear this message in audio format

ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಶನಿವಾರ ಕುಟುಂಬ ಸಮೇತ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದಿದ್ದಾರೆ. ಅವರಿಗೆ ಅಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಜತೆಗಿದ್ದರು.

ಶ್ರಾವಣ ಮಾಸದ ಶನಿವಾರದಂದು ಕುಟುಂಬ ಸಹಿತ ಬಂದು ಜೂನಿಯರ್ ಎನ್‌ಟಿಆರ್ ಶ್ರೀ ಕೃಷ್ಣ ದೇವರ ದರ್ಶನ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಅವರು ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಪಡೆದಿದ್ದಾರೆ. ನಟ ಜೂ. ಎನ್‌ಟಿಆರ್ ಅವರ ತಾಯಿ ಉಡುಪಿ ಮೂಲದರಾಗಿದ್ದಾರೆ. ಹಾಗಾಗಿ ಜೂ. ಎನ್​ಟಿಆರ್​ಗೆ ಕರ್ನಾಟಕದೊಂದಿಗೆ ವಿಶೇಷ ನಂಟಿದೆ.

ಕರ್ನಾಟಕದ, ಅದರಲ್ಲೂ ಉಡುಪಿ ಮೂಲದ ಅಮ್ಮನ ಮಗನಾಗಿರುವ ನಟ ಜೂನಿಯರ್ ಎನ್‌ಟಿಆರ್ ಕನ್ನಡವನ್ನೂ ಮಾತನಾಡುತ್ತಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಸಿನಿಮಾವೊಂದಕ್ಕೆ ಅವರು ಹಾಡನ್ನೂ ಹಾಡಿದ್ದಾರೆ. ಅವರು ಬೆಂಗಳೂರು ಅಥವಾ ಕರ್ನಾಟಕದ ಯಾವುದೇ ಭಾಗಕ್ಕೆ ಭೇಟಿ ಕೊಟ್ಟರೂ ಸಾಧ್ಯವಾದಷ್ಟು ಕನ್ನಡ ಮಾತನಾಡುವ ಮೂಲಕ ತಮ್ಮ ಅಮ್ಮನ ಭಾಷೆ (ಮಾತೃಭಾಷೆ) ಅಭಿಮಾನ ಮೆರೆಯುವುದನ್ನು ಮರೆಯುವುದಿಲ್ಲ.

ʼಕಾಂತಾರʼ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ಹಾಗೂ ಕೆಜಿಎಫ್ ಮೂಲಕ ಪ್ರಶಾಂತ್ ನೀಲ್ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಇನ್ನು ರಾಜಮೌಳಿ ನಿರ್ದೇಶನದ ಆಸ್ಕರ್‌ ವಿಜೇತ ಚಿತ್ರ 'ಆರ್‌ಆರ್‌ಆರ್‌' ಸಿನಿಮಾದ ನಟನೆಯ ಜೂನಿಯರ್ ಎನ್‌ಟಿಆರ್ ಅವರು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ.

Read More
Next Story